Published On Aug 29, 2024
ಇದರಿಂದ ಜ್ಞಾನ ವರ್ಧನೆ ಆಗುವುದು ಖಂಡಿತ | ಅವಧೂತ ಶ್ರೀ ವಿನಯ್ ಗುರೂಜಿ
ದೇವರು ಪ್ರತಿಯೊಬ್ಬರಿಗೂ ಒಂದೇ ರೀತಿಯ ಮೆದುಳಿನ ಸಾಮರ್ಥ್ಯವನ್ನು ಕೊಟ್ಟಿದ್ದಾನೆ, ಆದರೆ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದು ಮುಖ್ಯವಾಗಿರುತ್ತದೆ. ನಮ್ಮ ಒತ್ತಡಗಳು ಹಾಗೂ ಭಯದಿಂದ ಮರೆವು ಉಂಟಾಗುತ್ತದೆ. ಅದೇ ಸಂದರ್ಭ ಸಿಹಿಗೆ ನಮ್ಮ ಒತ್ತಡಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ಒತ್ತಡವನ್ನು ಹೆಚ್ಚಿಸುತ್ತಿದ್ದಾರೆಯೇ ಹೊರತು ಅವರ ಉತ್ಸಾಹಗಳನ್ನು ಅಭಿವೃದ್ಧಿಗೊಳಿಸುತ್ತಿಲ್ಲ. ವಿಧ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸುವುದೇ ಶಿಕ್ಷಣದ ಮೂಲ ಉದ್ದೇಶವಾಗಿರಬೇಕು. ನಾವು ಹೊರಗಿನ ಪ್ರಪಂಚವನ್ನು ಗಮನಿಸುತ್ತಿದ್ದರೆ ನಮಗೆ ಜ್ಞಾನ ಲಭ್ಯವಾಗುತ್ತದೆ. ಹಾಗೆಯೇ ಪ್ರಕೃತಿಯನ್ನು ಆಸ್ವಾದಿಸುವುದರಿಂದಲೂ ನಮಗೆ ಹಲವಾರು ಜ್ಞಾನ ಲಭಿಸುತ್ತದೆ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಒತ್ತಡ ಅಧಿಕವಾಗುವುದರಿಂದಲೇ ಮಕ್ಕಳಿಗೆ ಖಾಯಿಲೆಗಳು ಅಧಿಕವಾಗುತ್ತದೆ. ಅದರ ಮುಂದುವರಿದ ಭಾಗವೇ ನಗರಗಳಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡಕ ಬಂದಿರುವುದು. ಮುಂದುವರಿದು ಈಗಿನ ಮಕ್ಕಳಲ್ಲಿ ಚಿಂತನಾ ಶಕ್ತಿ ಕೂಡಾ ಕಡಿಮೆಯಾಗುತ್ತದೆ. ತೋರಿಕೆಯ ಬದುಕಿನಿಂದ ಜ್ಞಾನದ ಸೋರಿಕೆಯಾಗುತ್ತದೆ, ಜ್ಞಾನದ ಸೋರಿಕೆಯಿಂದ ಜೀವನವೇ ಹೊರೆಯಾಗುತ್ತದೆ.
#Avadhoothavinayguruji #Avadhootha #Vinayguruji #guruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #live #trending #treandingnow #topstories #kannadafollowers # #India #Ashram #kannadaculture #kanadigas #2021 #KasturiBaiCharitableTrust #BhagavadGita