Published On Dec 8, 2023
ನಿಮಗೆಲ್ಲ ತಿಳಿದಂತೆ, ಶ್ರೀ ಲಕ್ಷ್ಮೀನೃಸಿಂಹ ಯಕ್ಷವೇದಿಕೆ ಬಳಗಾರ ಇವರ ಆಯೋಜನೆಯಲ್ಲಿ ದಿನಾಂಕ 25 ನವೆಂಬರ್ 2023 ಶನಿವಾರ, ಬಳಗಾರದ ಗ್ರಾಮದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಯಕ್ಷಲಹರಿ-1 ರ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಒಂದನೇ ಭಾಗವನ್ನು ನೀವೆಲ್ಲ ಈಗಾಗಲೇ ನೋಡಿ ಹರಸಿರುವದಕ್ಕೆ ಧನ್ಯವಾದಗಳನ್ನು ಹೇಳುತ್ತಾ, ಎರಡನೇ ಹಾಗು ಅಂತಿಮ ಭಾಗವನ್ನ ಎಂದಿನಂತೆ ನಿಮ್ಮ ಹಾರೈಕೆಯ ನಿರೀಕ್ಷೆಯಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ...
ನೀವು ಒಂದನೇ ಭಾಗದಲ್ಲಿ ಆಲಿಸಿದಂತೆ,
ಅಯೋಧ್ಯಾಪುರಪತಿ ದಶರಥ ಹಾಗೂ ಮಂತ್ರಿ ಸುಮಂತ್ರರ ನಡುವಿನ ಪಟ್ಟಾಭಿಷೇಕದ ಮುನ್ನುಡಿ, ಇವನ್ನೆಲ್ಲ ಕದ್ದಾಲಿಸಿದ ಮಂಥರೆ ಮತ್ತು ಇನ್ನೂ ಈ ವಿಷಯಕ್ಕೆ ಕಿವಿಯಾಗದ ಮಹಾರಾಣಿ ಕೈಕೇಯಿಯ ಮುಗ್ಧತೆ ಮುತ್ತು ತಿಳಿದಾನಂತರ ಹಿಗ್ಗಿದ ಮಾತೃ ಹೃದಯ...
ಇನ್ನು ಮುಂದೆ,
ಮಂಥರೆಯ ಕುಬುದ್ಧಿ ಗೊತ್ತೇ ಆಗದೆ ಕೈಗೊಂಬೆಯಾದ ಕೈಕೇಯಿ, ಕದಡಿದ ಮಾತೃ ಹೃದಯ..ಸೋತ ದಶರಥ..ಹೊರಟು ನಿಂತ ರಾಮ..
ಹಿಮ್ಮೇಳ:
ಭಾಗವತರು : ಶ್ರೀ ರವೀಂದ್ರ ಭಟ್ಟ ಅಚವೆ ಮತ್ತು ಶ್ರೀ ಅನಂತ ಹೆಗಡೆ ದಂತಳಿಗೆ
ಮದ್ದಳೆ : ಶ್ರೀ ಶಂಕರ ಭಾಗ್ವತ್ ಮತ್ತು ಶ್ರೀ ಕವಾಳೆ ಗಣಪತಿ ಭಾಗ್ವತ್
ಮುಮ್ಮೇಳ:
ಶ್ರೀ ವಿದ್ವಾನ್ ಗಣಪತಿ ಭಟ್, ಸಂಕದಗುಂಡಿ
ಶ್ರೀ ವಿಶ್ವೇಶ್ವರ ಭಟ್, ಸುಣ್ಣಂಬಳ
ಶ್ರೀ ಗಣೇಶ ಶೆಟ್ಟಿ, ಕನ್ನಡಿಕಟ್ಟೆ
ಡಾ.|| ಶ್ರೀ ದತ್ತಾತ್ರೇಯ ಗಾಂವ್ಕರ್
ಶ್ರೀ ವಿದ್ವಾನ್ ಮಹೇಶ ಭಟ್, ಇಡಗುಂದಿ