Published On Nov 26, 2021
ಸುಮಾರು ಮೂರು ದಶಕಗಳ ಕಾಲ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಅತ್ಯಂತ ಆತ್ಮೀಯವಾಗಿದ್ದವರು ನಿರ್ಮಾಪಕ ಎನ್.ಎಸ್.ರಾಜ್ಕುಮಾರ್. ಪುನೀತ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಎನ್.ಎಸ್.ರಾಜ್ಕುಮಾರ್ (ವಜ್ರೇಶ್ವರಿ ಕುಮಾರ್) ‘ವಿಜಯ ಕರ್ನಾಟಕ ವೆಬ್’ ಜೊತೆಗೆ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ‘ಪೃಥ್ವಿ’ ಹಾಗೂ ‘ಮೈತ್ರಿ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದವರು ಇದೇ ಎನ್.ಎಸ್.ರಾಜ್ಕುಮಾರ್.
‘’ಪೃಥ್ವಿ’ ಸಿನಿಮಾದ ಕಥೆ ಅಪ್ಪು ಅವರಿಗೆ ಇಷ್ಟ ಆಯ್ತು. ನನ್ನ ಫಸ್ಟ್ ಪ್ರೊಡ್ಯೂಸರ್ ಮಾಡಿದವರು ಪುನೀತ್ ರಾಜ್ಕುಮಾರ್ ಅವರೇ. ‘ಮೈತ್ರಿ’ ಮುಂಚೆ ನಾನೊಂದು ಸಿನಿಮಾ ಮಾಡಿದ್ದೆ. ಅದರಿಂದ ನನಗೆ ಲಾಸ್ ಆಗಿತ್ತು. ಆಗ ನನ್ನನ್ನ ಇಟ್ಟುಕೊಂಡೇ ಒಂದು ಸಿನಿಮಾ ಮಾಡಿ ಎಂದರು ಅಪ್ಪು. ಗೆಸ್ಟ್ ಅಪಿಯರೆನ್ಸ್ ಇಟ್ಟುಕೊಂಡು ಮಾಡಿ, ನಾನು ಫ್ರೀಯಾಗಿ ಆಕ್ಟ್ ಮಾಡ್ತೀನಿ ಅಂತ ಅಪ್ಪು ಹೇಳಿದರು. ಅವರಿಗಿಂತ ನನ್ನನ್ನ ಜಾಸ್ತಿ ಫೋರ್ಸ್ ಮಾಡಿದವರು ಅಶ್ವಿನಿ. ಬಳಿಕ ಗಿರಿರಾಜ್ ಒಂದು ಸ್ಕ್ರಿಪ್ಟ್ ಹೇಳಿದರು. ಅದು ಅಪ್ಪುಗೆ ಇಷ್ಟ ಆಯ್ತು. ‘ಮೈತ್ರಿ’ ಸಿನಿಮಾ ಆಗೋದಕ್ಕೆ ಮುಖ್ಯ ಕಾರಣ ಅಶ್ವಿನಿ. ಚಿಕ್ಕದಾಗಿ ಶುರುವಾದ ಸಿನಿಮಾ ದೊಡ್ಡಗಾಗಿ ಆಯ್ತು. ಸಿನಿಮಾ ಚೆನ್ನಾಗಿ ಹೋಯ್ತು. ನನ್ನ ಸಾಲ ತೀರಿತು. ಅದಕ್ಕಾಗಿ ಫ್ರೀ ಕಾಲ್ಶೀಟ್ ಕೊಟ್ಟಿದ್ದರು. ಅದನ್ನ ಆಚೆ ಹೇಳಿದ್ದಕ್ಕೂ ಬೈಸ್ಕೊಂಡಿದ್ದೆ’’
‘’ಮೈತ್ರಿ’ ಸಿನಿಮಾದಲ್ಲಿ ವಾಚ್ ಬಿಚ್ಚಿ ಕೊಡುವ ಸೀನ್ ಇದೆ. ರಿಯಲ್ ಲೈಫ್ನಲ್ಲೂ ಅವರು ಹಾಗೇ ಮಾಡಿದ್ದಾರೆ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲೂ ಒಬ್ಬರಿಗೆ ದುಬಾರಿ ವಾಚ್ ಬಿಚ್ಚಿಕೊಟ್ಟಿದ್ದರು’’ ಎಂದು ಸಂದರ್ಶನದಲ್ಲಿ ಎನ್.ಎಸ್.ರಾಜ್ಕುಮಾರ್ ಹೇಳಿದ್ದಾರೆ.
#PuneethRajkumar #NSrajkumar #PrithviMovie
Our Website : https://Vijaykarnataka.com
Facebook: / vijaykarnataka
Twitter: / vijaykarnataka