Published On Sep 23, 2024
ಎಲ್ಲರಿಗೂ ನಮಸ್ಕಾರ ಅಡ್ಬಿದ್ದೇ ಗುರುಗಳೇ
🙏 ಕನ್ನಡ ಓನ್ಲಿ🙏
SuryaAnjaneyaTemple #anjaneyatemple #hanumantemple #SuryapuraTemple #koratagere #tumkur,#youtube #vlog #kalikadevi#katerammahoskote#hoskotekaterammam#ramsita#babaramdevi#srilanka#adichowdeshwaritemple#suryapurtemple#chowdeshwariamma
ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ Location -👇👇
https://goo.gl/maps/29...
(ಸೂರ್ಯ ಮತ್ತು ಆಂಜನೇಯ# ಸ್ವಾಮಿ ಇರುವ ಏಕೈಕ ದೇವಾಲಯ)
ಸೂರ್ಯಪುರ (ಹನುಮ ಕಲಿತ ಭೂಮಿ)
ಕೋಳಾಲ ಹೋಬಳಿ
ಕೊರಟಗೆರೆ ತಾಲ್ಲೂಕು
ತುಮಕೂರು ಜಿಲ್ಲೆ.
ಮೊ.9448270327
ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು / ಪ್ರವಾಸಿಗರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.
Suryanjaneya temple
ಸೂರ್ಯಾಂಜನೇಯ ದೇವಸ್ಥಾನ
Suryapura Ashram
ಸೂರ್ಯಪುರ ಆಶ್ರಮ
ಪೂಜಾ ಸಮಯ:
ಪ್ರತಿದಿನ ಬೆಳಗ್ಗೆ 7.30 ರಿಂದ ರಾತ್ರಿ 7.30 ರವರೆವಿಗೆ
ಭಕ್ತರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ.
ಸೂರ್ಯಪುರ ಆಶ್ರಮದಲ್ಲಿ ಪ್ರತಿದಿನ ಪ್ರಸಾದ ವ್ಯವಸ್ಥೆ ಇರುತ್ತದೆ.
ಮಹಿಮೆಯ ಪೌರಾಣಿಕ ಕ್ಷೇತ್ರ
ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ಹೆಸರನ್ನು 48 ಬಾರಿ ಬರೆದು ಹುಂಡಿಯಲ್ಲಿ ಹಾಕಿ, ಸ್ವಾಮಿಯ ಮುಂದೆ 2 ಎಳ್ಳು ಬತ್ತಿ ಹಚ್ಚಿದರೆ ಸಾಕು ಭಕ್ತರ ಸಕಲ ಕೋರಿಕೆಗಳು ಅತಿ ಶೀಘ್ರವಾಗಿ ನೆರವೇರುತ್ತವೆ ಎಂಬ ನಂಬಿಕೆಯಿದೆ.
ಗಮನಿಸಿ
ಶ್ರೀ ಕ್ಷೇತ್ರ ಸೂರ್ಯಪುರದಲ್ಲಿ ಯಾವುದೇ ರೀತಿಯ ಅಂಗಡಿಗಳು ಇರುವುದಿಲ್ಲ. ಆದ್ದರಿಂದ ದೇವರಿಗೆ ಹೂ ಮುಂತಾದ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದು.
-------------------------------------------------------
ಸೂರ್ಯಪುರ
ತುಮಕೂರು ಕಡೆಯಿಂದ ಬರುವವರು ದೇವರಾಯನದುರ್ಗ ರಸ್ತೆಯಲ್ಲಿ 12 ಕಿ ಮೀ. ಬಂದರೆ ಊರ್ಡಿಗೆರೆ ಸಿಗುತ್ತದೆ. ಇಲ್ಲಿ ಎಡಕ್ಕೆ ತಿರುಗಿ 100. ಅಡಿಗಳಷ್ಟು ಬಂದು ಮತ್ತೆ ಬಲಕ್ಕೆ ತಿರುಗಿ 6. ಕಿ.ಮೀ. ಬಂದರೆ ಕೋಳಾಲ ಕ್ರಾಸ್ ಸಿಗುತ್ತದೆ. ಹಾಗೆಯೇ ಕೋಳಾಲ ಕ್ರಾಸ್ ಮಾರ್ಗವಾಗಿ 4.ಕಿ.ಮೀ. ಮುಂದೆ ಸಾಗಿ ಬಂದರೆ ತಿಮ್ಮಸಂದ್ರ ಸಿಗುತ್ತದೆ. ಇಲ್ಲಿ ಎಡಕ್ಕೆ ತಿರುಗಿ ಹುಲುವಂಗಲ ರಸ್ತೆಯಲ್ಲಿ ,1 ಕಿಮೀ ಬಂದು ಮತ್ತೆ ಬಲಕ್ಕೆ ತಿರುಗಿ 1 ಕೀ. ಮೀ. ಮಣ್ಣಿನ ರಸ್ತೆಯಲ್ಲಿ ಬಂದರೆ ಸೂರ್ಯಾಂಜನೇಯ ಸ್ವಾಮಿ ದರ್ಶನ ನಿಮಗೆ ಆಗುತ್ತದೆ.
👍ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!