Published On Nov 7, 2022
ನಮ್ಮನ್ನು ಕಾಡುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ | ಸತ್ಯ ಬೆಳಕು ಬದುಕು | ಅವಧೂತ ಶ್ರೀ ವಿನಯ್ ಗುರೂಜಿ
ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಧ್ಯಾತ್ಮ ಲೋಕದ ಅನುಭಾವಿ ನುಡಿಗಳು ನೂತನ ಶೈಲಿಯಲ್ಲಿ ನಿಮ್ಮ ಮುಂದೆ ಬರುತ್ತಿದೆ. ಸತ್ಯ ಬೆಳಕು ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರನಟ ಮಾಸ್ಟರ್ ಆನಂದ್ ಅವರ ನಿರೂಪಣೆಯೊಂದಿಗೆ ನಿಮ್ಮ ಮುಂದೆ ಬಂದಿದೆ.
ಮನುಷ್ಯ ಕಾಮ, ಕ್ರೋಧ, ಮೋಹ, ಮದ, ಮತ್ಸರ ಮತ್ತು ಲೋಬವನ್ನು ತುಂಬಿಕೊಂಡಿರುತ್ತಾನೆ. ಮನುಷ್ಯ ಕಾಮವನ್ನು ಪೂರೈಸಿದಾಗ ಆ ಕ್ಷಣಕ್ಕಷ್ಟೇ ಸಮಾಧಾನಿತನಾಗುತ್ತಾನೆ. ಗುರು ಅಂದರೆ ಅರಿವೇ ಹೊರತು ಮನುಷ್ಯನಲ್ಲ. ಭಗವಂತ ತಾನೇ ಪಂಚಭೂತಗಳನ್ನು ಸೃಷ್ಟಿ ಮಾಡಿ ತನ್ನ ಚೈತನ್ಯವನ್ನು ಅದರೊಳಗೆ ಹಾಕುತ್ತಾನೆ. ಗೌರಿ, ಲಕ್ಷ್ಮಿ ಹಾಗೂ ಸರಸ್ವತಿ ಬೇರೆ ಬೇರೆ ರೂಪದಲ್ಲಿರುವುದಾದರೂ ಪ್ರೇರಣಾ ಶಕ್ತಿ ಒಂದೇ ಆಗಿದೆ. ಆದರೆ ಆ ಪ್ರೇರಣಾ ಶಕ್ತಿ ನಿರಾಕಾರ, ನಿರ್ಗುಣ ಮತ್ತು ನಿರಂಜನವನ್ನೂ ಮೀರಿದ್ದಾಗಿದೆ, ಅದುವೇ ಓಂಕಾರ. ನವರಸಗಳ ಮೂಲವೇ ನವರಂಧ್ರಗಳು. ನವರಂಧ್ರಗಳಿಗೂ ನವಗ್ರಹಕ್ಕೂ ಸಂಬಂಧ ಇವೆ. ಅದೇ ರೀತಿ ನವರಾತ್ರಿಗೂ ನವರಂದ್ರಕ್ಕೂ ಸಂಬಂಧ ಇವೆ. ಕಾಮನೆಗಳು ಪೂರ್ತಿಯಾಗಲಿಲ್ಲವೆಂದರೆ ಕ್ರೋಧ ಉಂಟಾಗುತ್ತದೆ. ಮೋಹದಿಂದ ಲೋಬ ಉಂಟಾಗುತ್ತದೆ. ಕಾಮ, ಕ್ರೋಧ, ಲೋಬ, ಮದ, ಮತ್ಸರ ಎಲ್ಲವೂ ಒಂದಕ್ಕೊಂದು ಬಂಧಿತವಾಗಿದೆ. ಸಪ್ತ ಋಷಿಗಳ ಮೂಲ ಪುರುಷನೇ ನಾರಾಯಣ. ನಮ್ಮೊಳಗಿನ ಜೀವದ ಹುಟ್ಟಿನ ರಹಸ್ಯವನ್ನು ತಿಳಿಯುವುದೇ ಆಧ್ಯಾತ್ಮ. ಧ್ವೈತ, ಅಧ್ವೈತ ಮತ್ತು ವಿಶಿಷ್ಟ ಅಧ್ವೈತ ಬೇರೆ ಬೇರೆ ಕಾಲ ರೂಪಗಳು. ತ್ರಿಮೂರ್ತಿಗಳಿಗೆ ತ್ರಿಕಾಲ ಜ್ಞಾನ ಇದ್ದುದರಿಂದಲೇ ತ್ರಿಮೂರ್ತಿಗಳಾಗಿರುವುದು. ಗೊತ್ತಿಲ್ಲದೇ ಗೊತ್ತಿರುವ ಹಾಗಿರುವುದು ಅಹಂಕಾರ ಮತ್ತು ಗೊತ್ತಿದ್ದೂ ಗೊತ್ತಿಲ್ಲದೇ ಇರೋ ಹಾಗಿರುವುದು ನಿರಹಂಕಾರ
For More Videos:
"ವಚನ ವಿಚಾರ | Vachana Vichara" • "ವಚನ ವಿಚಾರ | Vachana Vichara"
ಭಾವವನ್ನು ವ್ಯಕ್ತಪಡಿಸುವ ಗುಣ ಇರುವುದು ಇದಕ್ಕೆ ಮಾತ್ರ • ಭಾವವನ್ನು ವ್ಯಕ್ತಪಡಿಸುವ ಗುಣ ಇರುವುದು ಇದಕ...
ಇದಿರುವ ಮನೆ ಸದಾ ಬೃಂದಾವನವಾಗಿರುತ್ತೆ | The house which has this will always be Brindavana • ಇದಿರುವ ಮನೆ ಸದಾ ಬೃಂದಾವನವಾಗಿರುತ್ತೆ | Th...
ತನ್ನನ್ನು ತಾನು ಸಮರ್ಪಿಸಿಕೊಳ್ಳುವುದೇ ಶುದ್ಧ ಭಕ್ತಿ|Dedication of oneself is pure devotion • ತನ್ನನ್ನು ತಾನು ಸಮರ್ಪಿಸಿಕೊಳ್ಳುವುದೇ ಶುದ್...
ವಿಶ್ವದ ಎಲ್ಲ ತತ್ವಕ್ಕೂ ಮೂಲ ಇದೇ ತತ್ವ |This is the fundamental principle to every principle in the world • ವಿಶ್ವದ ಎಲ್ಲ ತತ್ವಕ್ಕೂ ಮೂಲ ಇದೇ ತತ್ವ |Th...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha #tirupati #tirupathitemple #tirupathidwara