ಬನ್ನಂಜಯ ಗೋವಿಂದ ಆಚಾರ್ಯರು ಶ್ರೀಕೃಷ್ಣನ ರಚಿಸಿರುವ ಒ೦ದು ದೇವರ ನಾಮ 🙏
Rachana Sharma Rachana Sharma
1.26K subscribers
691 views
15

 Published On Nov 11, 2023

ಉಡುಪಿಯ ಕಂಡೀರ..
ಹಾಡಿದವರು ಕುಮಾರಿ ರಚನ ಶರ್ಮ
ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ
ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ

ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ತಾರೆಯಿಂದ
ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ
ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಶಾ
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ

ಕಡಕೋಲು ಕೈಯ ಕಡುನೀಲಿ ಮೈಯ ಈ ಬಾಲ ರೂಪ ಕಂಡು
ಕೊಡಮಡದ ಶಿರವೋ ಜೋಡಿಸದ ಕರವೋ ಬರಿ ಹುಲ್ಲು ಮಣ್ಣು ದುಂದು
ಆ ಮುಗುಳುನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ
ಶ್ರೀಮಧ್ವಗೊಲಿದ ಕೃಷ್ಣನನೆಗೆಲಿದ ವೆಗ್ಗಳದ ನಾಡು ಉಡುಪಿ

ಪಡುಗಡಲ ತೀರದಿಂದೆದ್ದು ಬಾರ ಕಡಗೋಲು ಹಗ್ಗ ಹಿಡಿದು
ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು
ಆನಂದತೀರ್ಥರೀಕರೆಗೆ ಪಾರ್ಥಸಾರಥಿಯು ಕರಗಿ ಬಂದು
ತಾ ನಿಂತ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು

show more

Share/Embed