Published On Aug 7, 2024
“ಇವರು ಯಾರನ್ನೂ ಮೆಚ್ಚಿಸಲು ಮಾತನಾಡುವವರಲ್ಲ” – ವೀಣಾ ಬನ್ನಂಜೆ | Veena Bannanje talks about Avadhootha Vinay Guruji | ಅವಧೂತ ಶ್ರೀ ವಿನಯ್ ಗುರೂಜಿ
“ಅವಧೂತರು ಯಾರನ್ನೂ ಮೆಚ್ಚಿಸಲು ಮಾತನಾಡುವವರಲ್ಲ. ದುಡ್ಡು ತಗೊಂಡು ಭವಿಷ್ಯ ಹೇಳುವುದೂ ಇಲ್ಲ” ಎಂದು ಆಧ್ಯಾತ್ಮ ಚಿಂತಕರೂ ಸತ್ಯಕಾಮ ಪ್ರತಿಷ್ಠಾನದ ವೀಣಾ ಬನ್ನಂಜೆಯವರು ಅವಧೂತರ ಬಗ್ಗೆ ಗುಣಗಾನ ಮಾಡಿದ್ದಾರೆ.
ಬೆಂಗಳೂರಿನ ಗಾಯನ ಸಮಾಜದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ) ವತಿಯಿಂದ ನಡೆದ "ಆಚಾರ್ಯರ ಜನ್ಮಾರಾಧನೆ 89" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೀಣಾ ಬನ್ನಂಜೆ ಅವರು ವೇದಿಕೆಯಲ್ಲಿದ್ದ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಬಗ್ಗೆ ಮತ್ತು ಅವಧೂತರು ಸತ್ಯಕಾಮರ ಬಗ್ಗೆ ಇಟ್ಟಿದ್ದ ಅಪಾರ ಗೌರವದ ಬಗ್ಗೆ ಮಾತನಾಡುತ್ತಾ “ಯಾವ ಭಾವವೂ ಇಲ್ಲದ ನಗುಮುಖದೊಂದಿಗೆ ತನ್ನ ಪಾಡಿಗೆ ತಾನು ಬದುಕುವವರೇ ಅವಧೂತ ವಿನಯ್ ಗುರೂಜಿ. ವಿನಯ್ ಗುರೂಜಿ ಅವರು ನಿರಂತರ ಪುಸ್ತಕಗಳನ್ನು ಓದದಿದ್ದರೂ ಅಪಾರ ಜ್ಞಾನವನ್ನು ಹೊಂದಿದ್ದು ಹೊಸ ಹೊಸ ವಿಷಯಗಳನ್ನು ಸದಾ ಹೇಳುತ್ತಿರುತ್ತಾರೆ” ಎಂದು ಅವಧೂತರ ಗುಣಗಾನ ಮಾಡಿದ್ದಾರೆ.